News

ರಾಜಕಾಲುವೆ ನಿರ್ವಹಣೆಗಾಗಿ ರೋಬೋಟ್ ತರಿಸಲು ಮುಂದಾದ ಪಾಲಿಕೆ

Share It

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದು ಮಳೆಗೆ ಪ್ರವಾಹದ ಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಹಿನ್ನೆೆಲೆ ರಾಜಕಾಲುವೆ ನಿರ್ವಹಣೆಗಾಗಿ ರೋಬೋಟ್ ತರಿಸಲು ಪಾಲಿಕೆ ಮುಂದಾಗಿದೆ.

ಮಳೆಗಾಲದಲ್ಲುಂಟಾಗುವ ಪ್ರವಾಹ, ನೆರೆ ಅವಾಂತರಕ್ಕೆೆ ರಾಜಕಾಲುವೆಯ ನಿರ್ವಹಣೆಯ ಕೊರತೆಯೆ ಮೂಲ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ರಾಜಕಾಲುವೆಯನ್ನು ಕ್ಲೀನ್ ಮಾಡುವ ಸಲುವಾಗಿ ರೋಬೋಟ್ ತರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಮಳೆಗಾಲ ಆರಂಭವಾಗಲು ದಿನಗಳು ಬಾಕಿ ಇರವುದರಿಂದ ಪ್ರವಾಹದ ಸ್ಥಿತಿಯನ್ನು ತಪ್ಪಿಸುವ ಸಲುವಾಗಿ ರಾಜಕಾಲುವೆ ನಿರ್ವಹಣೆ ಮಾಡಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ರೋಬೋಟ್‌ನ ಕಾರ್ಯವೈಖರಿ ಸೇರಿದಂತೆ ಇತರೆ ವಿಚಾರಗಳ ಕುರಿತು ವಿಚಾರಣೆ ನಡೆಸುತ್ತಿದೆ.

ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಈ ಕುರಿತು ಮಾಹಿತಿ ನೀಡಿದ್ದು, ರೋಬೋಟ್ ಪ್ರೋಟೋ ಟೈಪ್ ಮಾದರಿ ಪಡೆದುಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಸದ್ಯ ಒಳಚರಂಡಿಯನ್ನು ಓಪನ್ ಮಾಡಿ ಅದನ್ನು ಕ್ಲೀನ್ ಮಾಡುವ ಕೆಲಸವನ್ನು ಮಾಡಲಾಗುತ್ತಿದ್ದು, ಪ್ರಮುಖವಾಗಿ ಜಂಕ್ಷನ್ ಗಳಲ್ಲಿ ಡ್ರೈನ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆೆ ಆಗುತ್ತಿದೆ. ಇದನ್ನು ತಪ್ಪಿಸಲು ರೋಬೋ ಕೆಲಸ ಮಾಡುತ್ತದೆಯಾ ಎಂದು ಪರಿಶೀಲನೆ ನೆಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ರಾಜಕಾಲುವೆ, ಮ್ಯಾನ್ ಹೋಲ್, ಮೋರಿ ಕ್ಲೀನ್ ಮಾಡುವ ನಿಟ್ಟಿನಲ್ಲಿ ಈಗಾಗಲೇ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ರೋಬೊಟ್ ಪ್ರಯೋಗ ನಡೆದಿದೆ. ಹೈದರಾಬಾದ್, ಕೇರಳದ ಕೊಚ್ಚಿ ಸೇರಿದಂತೆ ಹಲವು ನಗರದಲ್ಲಿ ರೋಬೊಟ್ ಮೂಲಕ ಹೂಳೆತ್ತುವ ಕಾರ್ಯ ನಡೆದಿದೆ. ಆದರೆ ಎಲ್ಲೂ ಕೂಡ ಈ ಪ್ರಯೋಗ ಯಶಸ್ಸು ಕಾಣಲಿಲ್ಲ. ನೂರಕ್ಕೆೆ ನೂರಷ್ಟು ಹೂಳು ಇದರಿಂದ ತೆರವಾಗದೆ ಹೈದರಾಬಾದ್‌ನಲ್ಲಿ ರೋಬೊಟ್ ಕೈ ಬಿಡಲಾಗಿದೆ. ಆದರೀಗ ಅದೇ ಮಾದರಿಯ ರೋಬೊಟ್‌ಗೆ ಕೋಟಿ ಕೋಟಿ ಸುರಿಯಲು ಮುಂದಾಗಿರುವುದು, ತೆರಿಗೆ ಹಣ ಪೋಲು ಮಾಡುವ ಮತ್ತೊಂದು ಯೋಜನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Share It

You cannot copy content of this page