News

ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್‌: ನಮ್ಮ ಮೆಟ್ರೊ ಪ್ರಯಾಣ ದರ ಇಳಿಸಲು ನಿರ್ಧಾರ

Share It

ಬೆಂಗಳೂರು: ನಮ್ಮ ಮೆಟ್ರೋ ರೈಲು ಟಿಕೆಟ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ತೀವ್ರ ಅಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಯಾಣ ದರವನ್ನು ಇಳಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಈ ಕುರಿತು ಸುದ್ದಿಗೋಷ್ಠಿ ನೆಡೆಸಿ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳು ಪ್ರಯಾಣ ದರ ಇಳಿಸಲು ನಮ್ಮ ಮೆಟ್ರೊಗೆ ಸಲಹೆ ನೀಡಿದ್ದರು. ಅದ್ದರಿಂದ ಪ್ರಯಾಣಿಕರಿಗೆ ಆಗಿರುವ ತೊಂದರೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ನಿಗದಿತ ಅಂತರದಲ್ಲಿ ಪ್ರಯಾಣದ ದರಗಳನ್ನು ಇಳಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಿರ್ವಹಣೆಯ ವೆಚ್ಚ, ಸಾಲ ಹಾಗೂ ಅದರ ಬಡ್ಡಿ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಟಿಕೆಟ್ ಬೆಲೆ ಏರಿಕೆ ಮಾಡಲಾಗಿತ್ತು. ನಮ್ಮ ಮೆಟ್ರೋ ನಿರ್ವಹಣಾ ವೆಚ್ಚ ಹೆಚ್ಚುತಿದೆ. ಸುಮಾರು 10 ಸಾವಿರ ಕೋಟಿ ಗಳಿಗೂ ಅಧಿಕ ಸಾಲ ಮತ್ತು ಬಡ್ಡಿಯನ್ನು ಮುಂದಿನ ಆರೇಳು ವರ್ಷಗಳಲ್ಲಿ ತೀರಿಸಬೇಕಿದೆ. ಈಗ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ನಾವು ದರಗಳನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ. ಪ್ರಯಾಣದ ದರ ಕನಿಷ್ಟ 10 ರೂ , ಗರಿಷ್ಟ 90 ರೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಎರಡೂ ದರಗಳ ನಡುವಿನ ದರಗಳನ್ನು ಅಧ್ಯಯನ ಮಾಡಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಕಡಿಮೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

100ರಷ್ಟು ದರ ಹೆಚ್ಚಳಕ್ಕೆ ಮುಂದಾಗಿದ್ದ ಬಿಎಂಆರ್‌ಸಿಎಲ್‌:

ಬಿಎಂಆರ್‌ಸಿಎಲ್‌ ಶೇ.47ರಷ್ಟು ಪ್ರಯಾಣ ದರ ಏರಿಸಿತ್ತು. ಕೆಲವು ಅಂತರಗಳಲ್ಲಿ ಶೇ.80ರಿಂದ 100ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಕಡಿಮೆ ಅಂತರದ ಪ್ರಯಾಣಕ್ಕೆ ಶೇ.100ರಷ್ಟು ಏರಿಕೆ ಮಾಡಲಾಗಿತ್ತು. 30 ಕಿ.ಮೀ.ಗಿಂತಲೂ ದೂರ ಪ್ರಯಾಣಿಸುವವರಿಗೆ ಶೇ. 70ರಷ್ಟು ಏರಿಕೆಯಾಗಿತ್ತು. 30 ರೂ. ಪಾವತಿಸುವ ಕಡೆ ರೂ.50 ಅಥವಾ 58 ರೂ. ತೆತ್ತು ಪ್ರಯಾಣಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.


Share It

You cannot copy content of this page