ಬೆಂಗಳೂರು: ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಿವೇಕ್ ಸುಬ್ಬಾರೆಡ್ಡಿ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಎಚ್ವಿ ಪ್ರವೀಣ್ ಗೌಡ ಅವರು ಚುನಾಯಿತರಾಗಿದ್ದಾರೆ.
ಮೀಸಲು ಸ್ಥಾನವಾಗಿರುವ ಖಜಾಂಚಿ ಹುದ್ದೆಗೆ ಶ್ವೇತ ರವಿಶಂಕರ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಿರೀಶ್ ಕುಮಾರ್ ಸಿಎಸ್ ಗೆಲುವು ಸಾಧಿಸಿದ್ದಾರೆ
ಏಷ್ಯಾದ ಅತಿದೊಡ್ಡ ವಕೀಲರ ಸಂಘವಾಗಿರುವ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಹುದ್ದೆಗೆ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ, ವಕೀಲರಾದ ನಂಜಪ್ಪ ಕಾಳೇಗೌಡ, ಆರ್ ರಾಜಣ್ಣ ಮತ್ತು ಟಿ ಎ ರಾಜಶೇಖರ್ ಸ್ಪರ್ಧಿಸಿದ್ದರು.
ವಿವೇಕ್ ಸುಬ್ಬಾರೆಡ್ಡಿ ಅವರು 6,820 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರೆ, 4,518 ಮತ ಪಡೆಯುವ ಮೂಲಕ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್ ಅವರು ವಿವೇಕ್ ಸುಬ್ಬಾರೆಡ್ಡಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಉಳಿದಂತೆ ಆರ್ ರಾಜಣ್ಣ ಅವರು 1,473 ಮತ ಪಡೆದಿದ್ದು, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ 378 ಮತ ಪಡೆದಿದ್ದಾರೆ. 123 ಮತ ಪಡೆದಿರುವ ನಂಜಪ್ಪ ಕಾಳೇಗೌಡ ಮತ್ತು 90 ಮತ ಪಡೆದಿರುವ ಟಿ ಎ ರಾಜಶೇಖರ್ ಅವರುಗಳ ಸ್ಪರ್ಧೆ ಔಪಚಾರಿಕ ಎಂಬಂತೆ ಕಂಡುಬಂದಿದೆ.
AAB ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರು:
ಹೈಕೋರ್ಟ್ ಘಟಕ:
1) ಆತ್ಮ ಹಿರೇಮಠ
2) ಬಾಲಕೃಷ್ಣ
3) ಚಾಮರಾಜ
4) ಚಂದ್ರಕಾಂತ ಪಾಟೀಲ್
5) ಅರವಿಂದ್ ಕಾಮತ್ ಪಿ
6)ರಾಜು ಎಸ್
7) ಸಂಧ್ಯಾ
8) ದೀಕ್ಷಾ
9) ಹರಿಣಿ
ಸಿಟಿ ಸಿವಿಲ್ ಕೋರ್ಟ್:
1) ಕೆ ಎನ್ ಅಂಬರೀಶ್
2) ಶಶಿಕುಮಾರ್ ಗೌಡ
3) ಅಂಜನ್ಕುಮಾರ್ ಗೌಡ
4) ತೇಜಸ್ವಿ ಗೌಡ
5) ಮುನಿರಾಜು
6) ಪುಟ್ಟರಾಜು
7) ಕಾಂತರಾಜು
8) ಕುಮಾರ್ ಆರ್.ಎಸ್. ಗೌಡ
9) ಚನ್ನಪ್ಪ ಗೌಡ
10) ರಾಕೇಶ್
11) ಜಿ ನಾಗರಾಜ
12) ಎಂ ಆಶಾ
13) ವೀಣಾ ರಾವ್
14) ಜೆ ಮಮತಾ
15) ಸಿ ಶಾರದಾ
ಮ್ಯಾಜಿಸ್ಟ್ರೇಟ್ ಕೋರ್ಟ್:
1) ಪ್ರಸನ್ನ ಕೆಂಪೇಗೌಡ
2) ಕೆ ಸಿ ಸತೀಶ್
3) ಅನಿಲ್ ಕುಮಾರ್
4) ಪ್ರಭು,
5) ಶಿವಶಂಕರ್
6) ಅಂದಲಿ
7) ಸುಜಾತಾ
ಮೆಯೊ ಹಾಲ್ ಕೋರ್ಟ್:
1) ಎ ಪಿ ನಟೇಶ್
2) ಕೆ ಮೋಹನ್
3) ಡಿ ಗುಣಶೇಖರ್
4) ಹಿತೇಶ್ ಕುಮಾರ್
5) ಭಕ್ತವತ್ಸಲ
6) ಕೆ ವಿ ರವಿಲಾ
7) ಉದಿತಾ ರಮೇಶ್