ಬೆಂಗಳೂರು: ವೈದ್ಯಕೀಯ ಸೌಲಭ್ಯವನ್ನು ಒದಗಿಸುವುದಷ್ಟೇ ಅಲ್ಲದೆ ರೋಗವನ್ನು ತಡೆಗಟ್ಟುವುದು ಸಹ ಪಾಲಿಕೆಯ ಕೆಲಸವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಡೆಂಘೆ ರೋಗ ಹೆಚ್ಚಳವಾಗುತ್ತಿರುವ ಕುರಿತು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಸಿಜೆ ಎನ್.ವಿ. ಅಂಜಾರಿಯ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರ ಪೀಠ ಡೆಂಘೆ ಸಂತ್ರಸ್ತರಿಗೆ ವೈದ್ಯಕೀಯ ಸೌಲಭ್ಯಗಳನ್ನು ನೀಡುವುದರ ಜೊತೆಗೆ ತ್ಯಾಜ್ಯ ವಿಲೇವಾರಿ ಮಾಡದೆ ಸೊಳ್ಳೆಗಳ ಹೆಚ್ಚಳಕ್ಕೆ ಕಾರಣರಾಗುತ್ತಿರುವ ಜನರು ಅಪಾರ್ಟ್ಮೆಂಟ್ ಗಳು ಮತ್ತು ಸಂಸ್ಥೆಗಳಿಗೆ ನೋಡಿ ಜಾರಿ ಮಾಡಿ ದಂಡ ವಿಧಿಸುವ ಕ್ರಮವನ್ನು ಸಹ ಕೈಗೊಳ್ಳಬೇಕು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿದೆ.
ಅವಮಾನ ಬದಲಾವಣೆ ನೀರು ನಿಲ್ಲುವುದು ಸೇರಿದಂತೆ ಹಲವಾರು ಕಾರಣಕ್ಕೆ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತಿದೆ 2004 ರಿಂದ 2015ರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಟ್ರೋಲಜಿ ಸಂಸ್ಥೆಯ ಸಂಶೋಧನಾ ವರದಿಯಲ್ಲಿ ಸೊಳ್ಳೆಗಳ ಹೆಚ್ಚಳದ ಕುರಿತು ಸಾಕಷ್ಟು ಮಾಹಿತಿ ಇದೆ. ಈ ರೀತಿಯ ವರದಿಗಳನ್ನು ಪರಿಗಣಿಸಿ ಡೆಂಘೆ ಜ್ವರಕ್ಕೆ ಕಾರಣವಾಗಬಹುದಾದ ಸೊಳ್ಳೆಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ಹೇಳಿದೆ.
ಆರೋಗ್ಯಕರ ವಾತಾವರಣ ಪ್ರತಿ ನಾಗರೀಕರ ಮೂಲಭೂತ ಹಕ್ಕಾಗಿದೆ ಸಂವಿಧಾನದ ಪರಿಚ್ಛೇದ 21 ರಲ್ಲಿ ಸಹ ಇದನ್ನು ಉಲ್ಲೇಖಿಸಲಾಗಿದೆ. ಇದರ ಅನ್ವಯ ಸಾರ್ವಜನಿಕರ ಆರೋಗ್ಯ ರಕ್ಷಣೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಕರ್ತವ್ಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.