News

ಕೋರ್ಟ್ ಕಲಾಪದ ವೇಳೆ ಕುಸಿದು ಬಿದ್ದು ನ್ಯಾಯವಾದಿ ಸಾವು

Share It

ಹೈದರಾಬಾದ್​: ನ್ಯಾಯಾಲಯದ ಕಲಾಪದಲ್ಲಿ ಭಾಗಿಯಾಗಿದ್ದ ವಕೀಲರೊಬ್ಬರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತೆಲಂಗಾಣ ಹೈಕೋರ್ಟ್​ನಲ್ಲಿ ನಡೆದಿದೆ.

ವೇಣುಗೋಪಾಲ್​ ರಾವ್ (60) ಅವರು ಹೈಕೋರ್ಟ್​ನ 21ನೇ ಹಾಲ್​​​​​ನಲ್ಲಿ ಕಲಾಪ ನಡೆಯುವ ವೇಳೆ​ ಕುಸಿದು ಬಿದ್ದಿದ್ದಾರೆ. ಕೂಡಲೇ ಸಹೋದ್ಯೋಗಿ ವಕೀಲರು ಹಾಗೂ ಇತರೆ ವಕೀಲರು ಅವರನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ವೇಣುಗೋಪಾಲ್ ಅವರನ್ನು ಪರೀಕ್ಷಿಸಿದ ವೈದ್ಯರು, ಅವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಕೋರ್ಟ್ ಕಲಾಪದ ವೇಳೆ ವಕೀಲರೊಬ್ಬರು ಈ ರೀತಿ ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪಿರುವುದು ವಕೀಲ ವೃಂದದಲ್ಲಿ ಆಘಾತವನ್ನು ಉಂಟುಮಾಡಿದೆ. ಮೃತ ವಕೀಲ ವೇಣುಗೋಪಾಲ್ ಅವರಿಗೆ ಸಂತಾಪ ಸಲ್ಲಿಸಿದ ನ್ಯಾಯಾಮೂರ್ತಿಗಳು ಮಧ್ಯಾಹ್ನದ ಕಲಾಪ ರದ್ದುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.


Share It

You cannot copy content of this page