ಬೆಂಗಳೂರು: ಹೊಸದಾಗಿ ದಾಖಲಿಸುವ ಪ್ರಕರಣಗಳನ್ನು 4 ರಿಂದ 5 ದಿನಗಳಲ್ಲಿ ನಿಗದಿತ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿ ಮಾಡಬೇಕು ಎಂದು ಹೈಕೋರ್ಟ್ ತನ್ನ ಕಚೇರಿ ಸಿಬ್ಬಂದಿಗೆ ಮಹತ್ವದ ಸೂಚನೆ ನೀಡಿದೆ.
ಈ ಕುರಿತಂತೆ ಮುಖ್ಯ ನ್ಯಾಯಮೂರ್ತಿಗಳ ಆದೇಶಾನುಸಾರ ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಅವರು ಸ್ಕ್ರೂಟಿನಿ ಮತ್ತು ಬೋರ್ಡ್ ಬ್ರ್ಯಾಂಚ್ ಗಳಿಗೆ (Scrutiny and Board Branches) ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರಿನ ಪ್ರಧಾನ ಪೀಠ ಮತ್ತು ಧಾರವಾಡ ಹಾಗೂ ಕಲಬುರಗಿಯ ಪೀಠಗಳಲ್ಲಿ ಕೆಲಸ ಮಾಡುವ ಎಲ್ಲಾ ಸ್ಕ್ರೂಟಿನಿ ಮತ್ತು ಬೋರ್ಡ್ ಬ್ರ್ಯಾಂಚ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳು, ಹೈಕೋರ್ಟ್ ಮುಂದೆ ದಾಖಲಾಗುವ ಪ್ರಕರಣಗಳನ್ನು 4ರಿಂದ 5 ದಿನಗಳಲ್ಲಿ ನ್ಯಾಯಪೀಠದ ಮುಂದೆ ಅಥವಾ ರಿಜಿಸ್ಟ್ರಾರ್ ಮುಂದೆ ಪಟ್ಟಿ ಮಾಡಬೇಕು ಎಂದು ತಿಳಿಸಲಾಗಿದೆ.
ಹೊಸದಾಗಿ ದಾಖಲಾಗುವ ಪ್ರಕರಣಗಳಲ್ಲಿ ಈ ಕೆಳಗಿನ ಕಚೇರಿ ಆಕ್ಷೇಪಣೆಗಳಿದ್ದಲ್ಲಿ
Office Objections
- Non-payment of Court Fee.
- Non-signing of Vakalath/Memo of Appearance by party or advocate/non-filing of supportive documents viz., GPA, Authorisation Letter, Registration Certificate of “Firm/Trust/Organisation/ Concerns etc.”
- Synopsis of the case (Rule 2(3)(b) of WP Rules).
- Non-filing of affidavit/errors in Affidavit.
- Non-filing of the impugned order.
- Objections regarding rank of parties/ non-joinder of necessary parties.
- Where Government/BBMP/BESCOM/ KIADB is party, service of copy on SP/GA/ASG/Standing Counsel/Panel Advocate.
ಅವುಗಳನ್ನು ಸಂಬಂಧಪಟ್ಟ ರಿಜಿಸ್ಟ್ರಾರ್ ಮುಂದೆ ಪಟ್ಟಿ ಮಾಡಬೇಕು.
ಮೇಲೆ ಪಟ್ಟಿ ಮಾಡಲಾದ ಕಚೇರಿ ಆಕ್ಷೇಪಣೆಗಳು ಇರದಿದ್ದಲ್ಲಿ ಅಂತಹ ಪ್ರಕರಣಗಳನ್ನು 4-5 ದಿನಗಳಲ್ಲಿ ನಿಗದಿತ ನ್ಯಾಯಪೀಠಗಳ ಮುಂದೆ ಪಟ್ಟಿ ಮಾಡಬೇಕು ಎಂದು ತಿಳಿಸಲಾಗಿದೆ. ಕ್ರಿಮಿನಲ್ ಅರ್ಜಿಗಳು, ಕ್ರಿಮಿನಲ್ ಪರಿಷ್ಕರಣಾ ಅರ್ಜಿಗಳು ಮತ್ತು ಕ್ರಿಮಿನಲ್ ಮೇಲ್ಮನವಿಗಳು ಗಳನ್ನು 4 ದಿನಗಳಲ್ಲಿ ಪಟ್ಟಿ ಮಾಡುವಂತೆ ಹಾಗೂ ಎಲ್ಲಾ ರೀತಿಯ ರಿಟ್ ಅರ್ಜಿಗಳು, ರಿಟ್ ಮೇಲ್ಮನವಿಗಳು ಮತ್ತು ಎಲ್ಲಾ ಸಿವಿಲ್ ಪ್ರಕರಣಗಳನ್ನು 5ನೇ ದಿನಗಳಂದು ನ್ಯಾಯಾಲಯಗಳ ಮುಂದೆ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ. ನಿಯಮಗಳನ್ನು ಪಾಲಿಸದಿದ್ದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಹೈಕೋರ್ಟ್ ನಲ್ಲಿ ಪ್ರಕರಣಗಳು ಪಟ್ಟಿಯಾಗುವ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಸಮುದಾಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿತ್ತು. ಪ್ರಭಾವಿಗಳ ಪ್ರಕರಣಗಳು ತ್ವರಿತವಾಗಿ ಪಟ್ಟಿಯಾಗುತ್ತವೆ. ಉಳಿದವರ ಪ್ರಕರಣಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ ಎಂಬು ಆರೋಪ ಕೇಳಿಬಂದಿತ್ತು. ಈ ಕುರಿತಂತೆ ಬೆಂಗಳೂರು ವಕೀಲರ ಸಂಘ ಕೂಡ ಧ್ವನಿ ಎತ್ತಿತ್ತು. ಇದೀಗ ಹೈಕೋರ್ಟ್ ಸುತ್ತೋಲೆ ಮೂಲಕ ವ್ಯವಸ್ಥೆ ಸುಧಾರಣೆಗೊಳಿಸಲು ಮುಂದಾಗಿದೆ.