ಬೆಂಗಳೂರು: ಕರ್ನಾಟಕ ನಾಗರಿಕ ಸೇವಾ ತಿದ್ದುಪಡಿಯಲ್ಲಿ ಅಭ್ಯರ್ಥಿಯು ಎಸ್ಎಸ್ಎಲ್ ಸಿ ಗಿಂತ ಉನ್ನತಮಟ್ಟದ ಪರೀಕ್ಷೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸಿದ್ದರೆ ಆಯೋಗ ಅಥವಾ ಇನ್ನಿತರೆ ಯಾವುದೇ ಆಯ್ಕೆ ಪ್ರಾಧಿಕಾರವು ಈ ಹಿಂದೆ ನಡೆಸಿದ ಕನ್ನಡ ಭಾಷೆಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಕರ್ನಾಟಕ ಲೋಕ ಸೇವಾ ಆಯೋಗ ಹೇಳಿದೆ.
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತು ಯಾವುದೇ ಅರ್ಜಿ ಸಲ್ಲಿಸದೇ ಕೇವಲ ಒಟಿಆರ್ ಮಾಡಿರುವ ಅಭ್ಯರ್ಥಿಗಳು ಸಹ ಕೆ.ಪಿ.ಎಸ್.ಸಿ ಜಾಲತಾಣವನ್ನು ಬಳಸುವ ಮೂಲಕ ವೈಯಕ್ತಿಕ ವಿವರಗಳ ಅಡಿಯಲ್ಲಿನ ಕನ್ನಡ ಭಾಷಾ ಪರೀಕ್ಷೆಯ ಟ್ಯಾಬ್ ನಲ್ಲಿ ಮತ್ತೊಮ್ಮೆ ಕನ್ನಡ ಭಾಷೆಯ ವಿವರಗಳನ್ನು ಮೇ. 25 ರ ಒಳಗಾಗಿ ಕಡ್ಡಾಯವಾಗಿ ನವೀಕರಿಸಬೇಕು ಎಂದಿದೆ.