ಬೆಂಗಳೂರು: ರಾಜಕೀಯ ಪಕ್ಷದ ನಾಯಕರು ಸಂಸತ್ತಿನ ಚರ್ಚೆಯಲ್ಲಿ ಆಸಕ್ತಿ ತೋರದೆ ಗದ್ದಲವೆಬ್ಬಿಸಿದರೆ ಅದರಿಂದ ಸಂಸತ್ ಸದಸ್ಯರಿಗೆ ನಷ್ಟವೇ ಹೊರತು, ಸರ್ಕಾರಕ್ಕೆೆ ಅಲ್ಲ. ಕೇಂದ್ರ ಸರ್ಕಾರದ ಬಳಿ ಬಹುಮತವಿದ್ದು ಅಗತ್ಯ ಬಿದ್ದಾಗ ವಿಧೇಯಕಗಳಿಗೆ ಒಪ್ಪಿಗೆ ಪಡೆದುಕೊಳ್ಳಲು ಸಮರ್ಥವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.
ಶನಿವಾರ ಹೈಕೋರ್ಟ್ನಲ್ಲಿ ಅಡ್ವೋಕೇಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ, ’ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಸಂಸದೀಯ ವ್ಯವಸ್ಥೆೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷದ ನಾಯಕರಿಗೆ ಸಂಸದೀಯ ಚರ್ಚೆಯಲ್ಲಿ ಆಸಕ್ತಿ ಇಲ್ಲದಿದ್ದು ಅವರು ಸದನದ ಕಲಾಪವನ್ನು ಹಾಳು ಮಾಡಲು ಉತ್ಸುಕರಾಗಿದ್ದರೆ ಅಂತಹ ನಾಯಕರ ಮೇಲೆ ಆ ಪಕ್ಷಗಳ ಕಿರಿಯ ಸಂಸದರು ಒತ್ತಡ ಹೇರಿ ಕಲಾಪ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಇತ್ತೀಚೆಗೆ ಮುಕ್ತಾಾಯಗೊಂಡ ಮುಂಗಾರು ಅಧಿವೇಶನದಲ್ಲಿ ಮೂರು ವಾರಗಳ ಕಾಲ ವಿರೋಧ ಪಕ್ಷಗಳ ಸದಸ್ಯರನ್ನು ಚರ್ಚೆ ನಡೆಸಲು ಮುಂದಾಗಿ ಎಂದು ಮನವಿ ಮಾಡಿಕೊಳ್ಳುತ್ತಲೇ ಇದ್ದೆೆ. ಪ್ರತಿ ಬೆಳಗ್ಗೆೆಯೂ ವ್ಯವಹಾರಗಳ ಪಟ್ಟಿ ತಯಾರಗಿರುತ್ತಿತು. ಆದರೆ ವಿರೋಧ ಪಕ್ಷವು ತನ್ನ ನಾಯಕನ ಇರಾದೆಯ ಮೇರೆಗೆ ವರ್ತಿಸುತ್ತಿದ್ದರಿಂದ ಸದನ ಕಲಾಪ ನಡೆಯಲಿಲ್ಲ ಎಂದು ಹೇಳಿದರು.
ಕೆಲವೊಂದು ಬಾರಿ ಸಂಸತ್ನಲ್ಲಿ ಉತ್ತಮ ಚರ್ಚೆಗಳು ನಡೆದರೂ ಸಹ ಮಾಧ್ಯಮಗಳು ಅದನ್ನು ತೋರಿಸುವುದಿಲ್ಲ. ಸಂಸತ್ತಿನಲ್ಲಿ ನಡೆದ ಯಾವುದಾದರೂ ಘಟನೆಯನ್ನು ಮಾತ್ರ ತೋರಿಸುತ್ತವೆ. ಇದರಿಂದ ಕೆಲ ಸಂಸದರು ಸಹ ಪ್ರಭಾವಿತರಾಗಿದ್ದು ಮಾಧ್ಯಮಗಳನ್ನು ಗಮನದಲ್ಲಿಟ್ಟುಕೊಂಡು ವರ್ತಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಿ. ವಿ. ಆಚಾರ್ಯ ಮಾತನಾಡಿ, ಅಧ್ಯಕ್ಷಿಯ ಮಾದರಿಯ ಪ್ರಜಾಪ್ರಭುತ್ವವನ್ನು ಅನುಸರಿಸಿದ್ದರೆ ಏನು ಅನಾಹುತವಾಗುತ್ತಿತ್ತು ಎಂಬುದಕ್ಕೆೆ ಇಂದಿನ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ ಉದಾಹರಣೆ. ನಮ್ಮ ದೇಶದಕ್ಕೆೆ ಸಂಸದೀಯ ಪ್ರಜಾಪ್ರಭುತ್ವ ಅತ್ಯುತ್ತಮವಾಗಿದೆ. ಆದರೆ ಇಂದು ಸಂಸತ್ತಿನ ಚರ್ಚೆಗಳ ಗುಣಮಟ್ಟ ಕುಸಿದಿದ್ದು, ಸಂಸತ್ತಿನಲ್ಲಿ ಚರ್ಚೆ ಮಾಡುವುದು ಬಿಟ್ಟು ಬೀದಿಯಲ್ಲಿ ಚರ್ಚೆ, ಹೋರಾಟ ಮಾಡಲಾಗುತ್ತಿದೆ. ಎಷ್ಟೋ ಸಂದರ್ಭದಲ್ಲಿ ಸ್ಪೀಕರ್ಗಳು ಸಹ ಮಾತನಾಡಲು ಸರಿಯಾಗಿ ಅವಕಾಶ ನೀಡುವುದಿಲ್ಲ. ಇದರಿಂದ ಸರಿಯಾಗಿ ಚರ್ಚೆ ನಡೆಯದೆ ಮಸೂದೆಗಳು ಸಂಸತ್ತಿನಲ್ಲಿ ಅಂಗೀಕಾರಗೊಳ್ಳುತ್ತಿವೆ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸಿದರೆ ಆಗ ನ್ಯಾಯಾಂಗ ಮತ್ತು ಕಾರ್ಯಾಂಗಕ್ಕೆೆ ಮಧ್ಯಪ್ರವೇಶದ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಅಡ್ವೋಕೇಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.